ಅನುಮಾನ ಬೇಡ ನಲ್ಲೆ
ನಾನು ನಿನ್ನಲ್ಲೆ
ನಿನ್ನೊಳಗಿನ ಭಾವದಲ್ಲಿ
ಬಂಧಿಯಾದೆನಲ್ಲೆ
ಹತ್ತಾರು ಕವನಗಳ
ಸ್ಪೂರ್ತಿ ನೀನು
ನೂರಾರು ಸಾಲುಗಳ
ಚಿಲುಮೆ ನೀನು
ನನ್ನ ಅಕ್ಷರಗಳ
ಸಾಕ್ಷಾತ್ಕಾರ ನೀನು
ಬೀಡು ನೀ ಮೌನ
ಸಂತೈಸಲು ಕಾಯುತ್ತಿದ್ದೆ
ನನ್ನ ಈ ಮನ
#ಸತೀಶಬಾರಿ
ಅನುಮಾನ ಬೇಡ ನಲ್ಲೆ
ನಾನು ನಿನ್ನಲ್ಲೆ
ನಿನ್ನೊಳಗಿನ ಭಾವದಲ್ಲಿ
ಬಂಧಿಯಾದೆನಲ್ಲೆ
ಹತ್ತಾರು ಕವನಗಳ
ಸ್ಪೂರ್ತಿ ನೀನು
ನೂರಾರು ಸಾಲುಗಳ
ಚಿಲುಮೆ ನೀನು
ನನ್ನ ಅಕ್ಷರಗಳ
ಸಾಕ್ಷಾತ್ಕಾರ ನೀನು
ಬೀಡು ನೀ ಮೌನ
ಸಂತೈಸಲು ಕಾಯುತ್ತಿದ್ದೆ
ನನ್ನ ಈ ಮನ
#ಸತೀಶಬಾರಿ
ಪ್ರೀತಿಯಿಂದ ಜೊತೆಯಾಗಿ
ಸಾಗಿದ ಪಯಣಕ್ಕಿಗ ಬೆಲೆ ಇಲ್ಲಾವಾಯಿತೆ
ಎದೆಯಲ್ಲಿ ನೀ ಬರೆದ
ಕಾಮನಬಿಲ್ಲಿನ ಚಿತ್ತಾರ ಚಿಧ್ರವಾಯಿತೆ
ಭಾರವಾದ ಜೀವನದಲ್ಲಿ
ನಿನ್ನ ನೆನಪುಗಳ ಹೊರ
ಎರವಲು ಕೊಡುವೆಯ
ಸಖಿ ಹಾ ನಿನ್ನ ಕಲ್ಲು ಮನಸ್ಸಾ
ತಾಳಲಾರೆನು ನೀ
ಇರದ ಈ ಸಮಯ
ನೋವಿನ ಕಣ್ಣಹನಿ
ಜಾರುತ್ತಿದೆ ನಿನ್ನ ಕಾಣದೆ
ಕಣ್ಣಹನಿಗಳಿಗೆ ಲೆಕ್ಕವಿಲ್ಲ
ಇನ್ನೂ ನಿನ್ನ ನೆನಪುಗಳೆ ನನಗೆಲ್ಲಾ
ವರುಷಗಳು ಹುರುಳುತಿವೆ
ಹರುಷಗಳು ಕರಗುತ್ತಿವೆ
ನಿನ್ನ ಪ್ರೀತಿ ಇನ್ನೂ
ಮರಿಚಿಕೆಯಾಗುತ್ತಿದೆ.
ನಿನ್ನ ಜೊತೆ ನನಸಿನ
ಜೀವನದಲ್ಲಿ ಸಾಗಬೇಕೆಂದು ಕೊಂಡೆ
ಆದರೆ ನೀ ಇನ್ನೂ ಕನಸು
#ಸತೀಶಬಾರಿ
೧)ದೇವರನ್ನೇಕೆ ಹುಡುಕುವಿರಿ.
೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ಅನುಭವಿಸಲೇಕೆ ಆಸೆ ಪಡುವಿರಿ.
೧)ದೇವರನ್ನೇಕೆ ಹುಡುಕುವಿರಿ.
--------------------------------------
ಎಲ್ಲಿಯೂ ಕಾಣದ ದೇವರನ್ನೇಕೆ ಹುಡುಕುವಿರಿ, ದೇವರಿರುವನು ನಿಮ್ಮ ನಡುವೆ ಅದು ರೂಪದಲ್ಲಾದರು ಸರಿ, ದೇವರನ್ನು ಕಾಣುವ ಮಾನವೀಯ ಕಣ್ಣೀರಬೇಕು ಅಷ್ಟೇ.
ದೇವರಿರುವನು ನಿಮ್ಮ ಮಕ್ಕಳ ರೂಪದಲ್ಲಿ, ತಂದೆತಾಯಿಯ ರೂಪದಲ್ಲಿ, ಮಡದಿ ರೂಪದಲ್ಲಿ, ಸಹೋದರ/ಸಹೋದರಿಯ ರೂಪದಲ್ಲಿ, ನಿಮ್ಮ ಸ್ನೇಹಿತರ ರೂಪದಲ್ಲಿ. ಕಷ್ಟದಲ್ಲಿ ನಿಮಗೆ ಸಹಾಯ ಮಾಡುವ ಜನರ ರೂಪದಲ್ಲಿ .
ನಿಮಗೂ ದೇವರಾಗುವ ಬಯಕೆ ಇದ್ದರೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ. ಕಷ್ಟಕಾಲದ ಸಹಾಯವೇ ಅವರಿಗೆ ವರ, ವರ ಕೊಡುವವನು ದೇವರು ಮಾತ್ರ ಅಲ್ಲವೆ.
೨)ಆ ಧರ್ಮ ಈ ಧರ್ಮ ಅಂತೇಕೆ ಬಡಿದಾಡುವಿರಿ.
----------------------------------------------------------------
ಧರ್ಮದ ಹೆಸರಲ್ಲಿ ಜಗತ್ತಿನ ತುಂಬಾ ಅದೆಷ್ಟೋ ಮಾರಣಾಹೋಮ ನಡೆದಿದೆಯೊ ಲೆಕ್ಕವಿಲ್ಲ. ಧರ್ಮದ ಹಣೆಪಟ್ಟಿ ಕಟ್ಟಿಕೊಂಡು ಅಧರ್ಮದ ದಾರಿಯಲ್ಲಿ ನಡೆಯುತ್ತಾ ರಕ್ತದೊಕುಳಿ ನಡೆಸುತ್ತಿರುವರನ್ನು ನೋಡಿದರೆ ಮನಸ್ಸು ಸಂಕಟವಾಗುತ್ತದೆ. ಧರ್ಮದ ಮೂಲ ಆಶಯವನ್ನು ಗಾಳಿಗೆ ತೂರಿದ ಕಟುಕರನ್ನು ಸರಿದಾರಿಗೆ ತರುವರಾರು? .
ಧರ್ಮದ ವಿಚಾರದಲ್ಲಿ ಬಸವಣ್ಣನವರನ್ನು ನೆನೆಯಲೆಬೇಕು . "ದಯವೇ ಧರ್ಮದ ಮೂಲವಯ್ಯ" ಎಂದು ಒಂದೇ ವಾಕ್ಯದಲ್ಲಿ ಹೇಳಿದ ಮಹಾನ್ ಚೇತನ .
ನಿಜ ಧರ್ಮ ವೆಂದರೆ ದಯೇ , ಪ್ರೀತಿ, ಸ್ನೇಹ. ಜನರು ಪಾಲಿಸು ಪಂಥ ಯಾವುದೇ ಇರಲಿ, ಸಕಲರನ್ನು ಪ್ರೀತಿಯದಿ , ಸ್ನೇಹದಿ ಕಾಣುವುದೇ ನಿಜವಾದ ಧರ್ಮ ಅದು ವಿಶ್ವಮಾನವನ ಧರ್ಮ .
೩)ಬದುಕಿದ್ದಾಗ ಸಿಗದ ಸ್ವರ್ಗ ಸತ್ತ ಮೇಲೆ ------------------------------------------------- ಅನುಭವಿಸಲೇಕೆ ಆಸೆ ಪಡುವಿರಿ.
---------------------------------------
ಮೇಲಿನ ಎರಡನ್ನೂ ಪಾಲಿಸಿದರೆ ಸ್ವರ್ಗ ನಿಮ್ಮೆದುರೆ ಮನಬಿಚ್ಚಿ ಕೊಳ್ಳಲಿದೆ.
#ಸತೀಶಬಾರಿ
ಮೊದಲನೆಯ ಮದುವೇ ಆಗುವ ಇರುವ ಕಷ್ಟ
ಎರಡನೇ ಮದುವೆ ಆಗುವಾಗ ಆ ಕಷ್ಟ ಇರುವುದಿಲ್ಲವಂತೆ
Experience's make's man perfect
ಕಣ್ಣ ತುಂಬಿಕೊಬೇಡ ಸಖಿ
ನೋಡಲಾಗದು ನಿನ್ನ ಅಳುಮೊಗವ
ನಿನ್ನ ಕಣ್ಣ ರಪ್ಪೆಯಾಗಿ ನಾನಿರುವೆ
ನಿನ್ನ ಕಣ್ಣ ಹನಿಗೆ ನಾನೇ ಮೊದಲು ತೊಯುವೆ
ಅರಿಯಬಲ್ಲೆ ನಿನ್ನ ಹೃದಯ ಭಾಷೆಯ
ನಾ ತಿಳಿಯ ಬಲ್ಲೆ ನಿನ್ನ ಭಾವನೆಯ
ಬಾ ನಿನ್ನ ಇನಿಯನ ಸನಿಹ
ಅಪ್ಪಿಕೊಂಡು ಮರೆಸುವೆ ನಿನ್ನ ದುಃಖವ
ಹೃದಯ ಸಿರಿವಂತರೊ ನಾವು
ಹೃದಯ ಸಿರಿವಂತರೊ
ಹೊಟ್ಟೆಗೆ ಹಿಟ್ಟಿಲ್ಲ
ತಲೆಗೆ ಸುರಿಲ್ಲ
ಆದರೂ ನಮ್ಮ ಘನತೆಗೆನು
ಕಮ್ಮಿ ಇಲ್ಲ
ಹಣಕ್ಕೆ ಬೆಲೆಯಿಲ್ಲ
ಪ್ರೀತಿಗೆನೂ ಕಮ್ಮಿಯಿಲ್ಲ
ಗೌರವಕ್ಕೆ ತಲೆ ಬಾಗುವೆವು ನಾವೆಲ್ಲ
ಜಾತಿ ಧರ್ಮಗಳ ಬೇಲಿ ಇಲ್ಲ
ಮೇಲು/ಕೀಳಿನ ಭೇದ ಭಾವವಿಲ್ಲ
ಸ್ನೇಹವೇ ಜೀವ ನಮಗೆಲ್ಲ
ಜೀವನವನ್ನು ಅನುಭವಿಸುತ್ತೆವೆ
ಅದು ಎಷ್ಟೇಂದರೆ
ಸಾವಿಗೆ ಅಂಜುವುದಿಲ್ಲ
ನಗುವಿಗೆನೂ ಕೊರತೆಯಿಲ್ಲ
ಯಾಕೆಂದರೆ -
ನಾವು ಹೃದಯ ಸಿರಿವಂತರು
#ಸತೀಶಬಾರಿ
ನನ್ನವಳ ನೋಟಕ್ಕೆ
ಮೇಘರಾಜನು ಕರಗಿ
ಭೂಮಿಗೆ ಬರುವ
ಅವಳು ಬರುವ ದಾರಿಲಿ
ಗಿಡಮರಗಳಿಗೂ ಬಿಸಣಿಕೆಯಾಗಿ
ಬಿಸುವ ಆಸೆ
ನನ್ನವಳು ಕಂಡರೆ
ಮಿಂಚಿಗು ಅವಸರ
ಅವಳ ಛಾಯಾಚಿತ್ರ
ತೆಗೆಯುತ್ತದೆ ಸರಸರ
ಅಮಾವಾಸ್ಯೆಯ ಕತ್ತಲೆಯಲ್ಲಿ
ನನಗೆ ನನ್ನವಳೆ ಹುಣ್ಣಿಮೆಯ
ಚಂದಿರನ ಬೆಳಕು
ನನ್ನವಳ ನೋಡಲು
ಸೂರ್ಯ ಚಂದ್ರರಿಗೂ
ನಿತ್ಯವು ಜಗಳ
ಅವನು ಇಲ್ಲದಿದ್ದರೆ ಇವನು ಬರುವ
ಇವನು ಇಲ್ಲದಿದ್ದರೆ ಅವನು ಬರುವ
#ಸತೀಶಬಾರಿ
ನೋಡು ಹೃದಯವಿಗ
ನೂರಾರು ಚುರು
ನಿನ್ನ ಧ್ವನಿ ಕೇಳಿಸಿದ ಪ್ರತಿ
ಸಮಯವು ಮೌನ ವ್ರತ
ಗೆಳತಿ ಏನೋ ಹೇಳಬೇಕೆಂದಿರುವೆ
ನಿನಗಾಗಿ ಏನೋ ಬರೆಯಬೇಕೆಂದಿರುವೆ
ನಿನ್ನ ಹೆಸರಲ್ಲೇ ಬರೆಯುತ್ತಿರುವೆ
ಒಂದು ಪ್ರೇಮದ ಓಲೆಯ
ಪ್ರತಿ ಸಾಲಿನಲ್ಲಿ ಬಿಡುಬಿಟ್ಟರುವುದು
ನಿನ್ನ ಪ್ರೇಮದ ಸಿಂಚನ
ನಿನ್ನ ನೆನಪಲ್ಲೆ ಪ್ರತಿ ಅಕ್ಷರಗಳನ್ನು
ಪದಗಳಾಗಿ ಪೋಣಿಸಿರುವೆ
ಒಲವೇ ನಿನಗಾಗಿ ಬರೆಯುತ್ತಿರುವೆ
ನೀನಿಂದಾಗಿ ಬರೆಯುವದ ಕಲಿತೆ
ಒಂದೇ ಆಸೆ ಈ ಜೀವಕೆ
ಉಸಿರಿರುವ ತನಕ ನಿನಗಾಗಿಯೇ ಬರೆಯುವೆ
ನನ್ನಲ್ಲಿ ನೀ ಬೆರೆತಾಗ
ನನ್ನನ್ನು ನಾ ಮರೆವೆ ಆಗ
ನೀ ಜೊತೆಯಾದಗ
ಖುಷಿ ನೂರಾದಾಗ
ನನ್ನ ಹಿಡಿತಕ್ಕೆ ನಾ ಸಿಗುತ್ತಿಲ್ಲ
ಪ್ರೀತಿಯ ಜ್ವರ ಬಲು ಜೋರಾಗಿ
ನಿನ್ನ ಕಾಣುವಿಕೆಯೇ ನನಗೆ ಔಷಧಿಯಾಗಿ
ಅಯ್ಯೋ ನನಗೇನಾಗಿದೆ
ನನ್ನನ್ನೇ ನಾ ಹುಡುಕಬೇಕಾಗಿದೆ
#ಸತೀಶಬಾರಿ
ನನ್ನವಳಿಗೆಕೇ
ಬಂಗಾರದ ಸಿಂಗಾರಾ
ಅವಳ ನಗುವೇ
ಅವಳಿಗೆ ಒಡವೆಗಳ ಸಿಂಗಾರ ||
ಅವಳಿಗಿಲ್ಲ
ಬಂಗಾರದ ಹುಚ್ಚು
ಯಾಕೆಂದರೆ
ಅವಳಿಗೆ ನಾನೇ
ಅಚ್ಚು-ಮೆಚ್ಚು||
ಒಂದು ಕ್ಷಣವು
ಅವಳು ಕಾಣದಿದ್ದರೆ
ನಸುಬಾಡುತ್ತದೆ ನನ್ನ ಮನ
ಅವಳಿಟ್ಟ ಪ್ರೀತಿಯ ಕಚಗುಳಿಗೆ
ಭಾವಾಯಾನದಲ್ಲಿ ತೇಲಾಡುತ್ತಿದೆ
ಈ ಬಡಪಾಯಿ ಮನ||
#ಸತೀಶಬಾರಿ
ಒಡಲಾಳದ ನೋವು
ತಿಳಿಯದು ಯಾರಿಗೂ
ಜಗತ್ತೇ ಹೊರಗೊಂದು
ಒಳಗೊಂದು ಬದುಕುತ್ತಿರುವಾಗ
ನನ್ನ ನೋವು ಅರಿವರಾರು..? ||
ಇಲ್ಲಿ ಭಾವನೆಗಳಿಗೆ ಬೆಲೆಯಿಲ್ಲ
ನಾಟಕವೇ ಎಲ್ಲಾ
ಸಂಬಂಧಗಳು ಹಳಸುತ್ತಿರುವಾಗ
ಹೊನ್ನಿಗಾಗಿ ಮಣ್ಣಿಗಾಗಿ
ಬಡಿದಾಡುವವರೇ ಎಲ್ಲಾ ||
ಎಲ್ಲಿ ಹುಡುಕಲಿ ಸ್ವಚ್ಛ ಬದುಕು
ಕಾಣದಾಗಿದೆ ಉತ್ತಮ ಸಮಾಜ
ಹುಡುಕುತ್ತಿರುವೆ ವಿಶ್ವಮಾನವನ ಸಮೂಹ.
#ಸತೀಶಬಾರಿ
ನನ್ನ ಕೈಯಲ್ಲಿ ಇಷ್ಟಲಿಂಗವಿರುವಾಗ
ನಾನೇಕೆ ಅಸ್ತರೇಖೆಯನ್ನು ನಂಬಲಯ್ಯಾ
ನನ್ನ ಹಣೆಯಲ್ಲಿ ವಿಭೂತಿ ಇರುವಾಗ
ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ್ಯಾ
ಕೂಡಲಸಂಗಮದೇವನು ನನ್ನಲ್ಲಿರುವಾಗ
ನಾನೇಕೆ ಊರಾ ದೇವರ ಹುಡುಕಲಯ್ಯಾ
ಅಣ್ಣ ಬಸವಣ್ಣ ನೀ ತೋರಿಸಿಕೊಟ್ಟ
ಧರ್ಮದ ದಾರಿ ಇರುವಾಗ
ನಾನೇಕೆ ಅಧರ್ಮದ
ದಾರಿಯಲ್ಲಿ ನಡೆಯಲಯ್ಯಾ .
#ಸತೀಶಬಾರಿ
ಜಾತಿ ಧರ್ಮವನ್ನು ಮರೆಯೊಣಾ
ಭಾರತದ ಏಕತೆಗಾಗಿ ನಡೆಯೊಣಾ
ದೇಶದ್ರೋಹಿಗಳು ದೇಶವೈರಿಗಳು
ಯಾರೇ ಆಗಿರಲಿ ಸದೆ ಬಡೆಯೊಣಾ
ಭಾರತಕ್ಕಾಗಿ ದುಡಿಯೊಣಾ
ದೇಶ ಸೇವೆಯು ದೇವರ ಸೇವೆಯು
ದೇಶವೇ ನಮ್ಮ ಉಸಿರು, ನಮ್ಮ ಸರ್ವಸ್ವ
ಭಾರತವು ಸುಮ್ಮನೇ ದೇಶವಾಗಿಲ್ಲವೊ
ಸಾವಿರಾರು ವರ್ಷಗಳ ಇತಿಹಾಸ
ಉಂಟು ನೀ ತಿಳಿಯೋ
ಸ್ವತಂತ್ರ್ಯಕ್ಕಾಗಿ ದೇಶದ ಜನರ
ರಕ್ತದ ಕೊಡಿ ಹರಿದು
ಶೂರರ ಧೀರರ ದೇಶ ಭಾರತ
ನೂರಾರು ದೇಶಗಳಿರಬಹುದು
ನಮ್ಮ ಭಾರತ ನಮಗೆ ಶ್ರಷ್ಠ
ಬನ್ನಿ ಸಹೋದರ ಸಹೋದರಿಯರೆ
ಭಾರತಕ್ಕಾಗಿ ದುಡಿಯೊಣಾ
ಭಾರತಕ್ಕಾಗಿ ನಡೆಯೊಣಾ
ನನ್ನ ಭಾರತ ನನ್ನ ಹೆಮ್ಮೆ
#ಸತೀಶಬಾರಿ
ನನ್ನ ಭಾವನೆಯ ಲೋಕದ ಗೆಳತಿ
ಹೆಜ್ಜೆ ಇಡುವೆಯಾ ನನ್ನೊಡನೆ
ಬರುವೆಯಾ ಮೆಲ್ಲನೆ ||
ಮೆಲ್ಲನೆ ನಡೆದು ಬಿಡು ನನ್ನೊಡನೆ
ಮತ್ತೆ ನನ್ನ ಬಿಟ್ಟು
ಹೋಗಲಾರದಷ್ಟು ದೂರವ ||
ನೀನೆ ನನ್ನ ಲೋಕದ ಒಡತಿಯಾಗರುವಾಗ
ಇನ್ನೆಕೇ ದೂರವಾಗುವ ಮಾತು
ಪ್ರತಿ ಕ್ಷಣವು ನಿನ್ನ ಹಾಜರಾತಿ
ಬಯಸುತ್ತಿದೆ ನನ್ನ ಈ ಮನ||
ನೋಡು ಒಂದು ಸಾರಿ
ನನ್ನ ಮನಸ್ಸಿನ ಅವ್ಯವಸ್ಥೆಯ
ಬಿಳಿ ಹಾಳೆಯಾಗಿತ್ತು ನನ್ನ ಈ ಮನ
ಮೃದು ಮನಸ್ಸಿನ ಮೇಲೆ
ನಿನ್ನದೆ ಭಾವನೆಗಳ ಚಿತ್ತಾರ ||
#ಸತೀಶಬಾರಿ
ಸಾಮರಸ್ಯ ಜೀವನ
_____________________
ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವವಿಸುವುದು, ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ-ಜೀವನವನ್ನು ಹೊಂದಬೇಕು, ಸಹೃದಯತೆಯಿಂದ ಜೀವಿಸಬೇಕು ಎಂಬ ಕಲ್ಪನೆಯೇ "ಸಾಮರಸ್ಯ".
ನಾವೆಲ್ಲರೂ ಒಂದೇ ನಮ್ಮಲ್ಲಿ ಸೈದ್ಧಾಂತಿಕ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು ಆದರೆ, ನಾವೆಲ್ಲರೂ ಮನುಷ್ಯರು ಎಂಬ ಭಾವನೆ, ಪ್ರೀತಿ ನಮ್ಮಲ್ಲಿ ಬರಬೇಕು. ಮನುಷ್ಯ ತನ್ನ ಮನಸ್ಸಿಗೆ ಹಾಕಿಕೊಂಡಿರುವ ಜಾತಿ ಧರ್ಮ ಎಂಬ ಬೇಲಿಯಿಂದ ನರಳಾಡಿ ಬಡಿದಾಡಿ ತನಗೂ ಸುಖವಿಲ್ಲ ಇನ್ನೊಬ್ಬರಿಗು ಸುಖವಿಲ್ಲದೆ ಬಾಳುತ್ತಿರುವುದು ಅಸಹ್ಯ ಸಂಗತಿ. ಮನುಷ್ಯನು ಸಂಕುಚಿತ ಮನಸ್ಸಿಂದ ಹೊರಬರಲೆಬೇಕು, ಇಲ್ಲವಾದರೆ ಮನುಷ್ಯನಿಗೆ ಉಳಿಗಾಲವಿಲ್ಲ .
ಸಾಮರಸ್ಯ ಜೀವನವೇ ಒಂದು ಅದ್ಭುತವಾದ ಅನುಭವ. ಅದರಲ್ಲೂ ಭಾರತೀಯರು ವಿಶ್ವಕ್ಕೆ ಸಾಮರಸ್ಯ ಜೀವನ ಎಂದರೆ ಏನು ಅಂತ ತೋರಿಸಿಕೊಟ್ಟವರು, ಭಾರತೀಯರ ಸಾಮರಸ್ಯ ಮತ್ತು ಜೊತೆಯಾಗಿ ಕೂಡಿಬಾಳುವಿಕೆಯ ಸಂಸ್ಕೃತಿಯೇ "ಭಾರತದ ಹೆಗ್ಗುರುತು"
"ವಸುದೈವ ಕುಟುಂಬಕಂ" ಎಂದು ವಿಶ್ವಕ್ಕೆ ಸಾರಿದ ದೇಶ ಭಾರತ, ಎಂತಹ ಅದ್ಭುತ ಭಾವ ಭಾರತೀಯರದ್ದು ಇಡೀ ವಿಶ್ವವೇ ಒಂದು ಕುಟುಂಬ ಅದರಲ್ಲಿ ನಾನು ಒಬ್ಬ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನದ್ದು .
ಶರಣ ಶ್ರೀ ಬಸವಣ್ಣನವರು
ಇವನಾರವ ಇವನಾರವ
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಯ್ಯಾ
ನಿಮ್ಮ ಮನೆಯ
ಮಗನೆಂದೆನಿಸಯ್ಯಾ
ಹೇಳಿದ ಹಾಗೆ,
ಮನುಷ್ಯನು ಮನುಷ್ಯನನ್ನು ಯಾವ ಜಾತಿ ಯಾವ ಧರ್ಮ ಅಂತ ನೋಡದೆ ಪ್ರತಿಯೊಬ್ಬರು ನಮ್ಮವರು
ಎಂಬ ಭಾವನೆ ನಮ್ಮಲ್ಲಿ ಬಂದಾಗ ಜೀವನವು ಶಾಂತಿಯಿಂದ ಸಾಗಲಿದೆ.
ಒಂದು ದೇಶವು ಸಂಪೂರ್ಣ ಸ್ವಾವಲಂಬನೆಯಾಗಬೇಕಾದರೆ ಆ ದೇಶದ ಜನರ ಸೌಹಾರ್ದತೆ ಮತ್ತು ಸಾಮರಸ್ಯ ಜೀವನವು ತುಂಬ ಪ್ರಮುಖ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು, ಒಂದು ಸಮಾಜವು, ಒಂದು ದೇಶವು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಸಾಮರಸ್ಯ ಜೀವನ ನಡೆಸಿದರೆ ಉತ್ತಮ ಬೆಳವಣಿಗೆ ಕಾಣಬಹುದು, "ಭಾರತವು ಆ ದಿಶೆಯಲ್ಲಿ ಸಾಗಲಿ ಅಂತ ಹಾರೈಸುವ" .
ಜೈ ಭಾರತ , ವಂದೇ ಮಾತರಂ
#ಸತೀಶಬಾರಿ
ನಿನ್ನ ಹೃದಯದ
ಬಾಗಿಲಿಗೆ ಬಂದಿರುವೆ
ಒಳ ಬರಲು ಅಪ್ಪಣೆಯೇ
ಗೆಳತಿ ||
ಪ್ರೀತಿ ಕನಸು
ಹೊತ್ತು ಬಂದಿರುವೆ
ನಿನ್ನ ಒಲವ
ಬಯಸಿ ನಿಂತಿರುವೆ
ಜೊತೆಯಿರಲು
ಅಪ್ಪಣೆಯೇ ಗೆಳತಿ||
ಇಳಿಸಂಜೆಯ ತಂಗಾಳಿಯು
ನಮ್ಮಿಬ್ಬರಿಗಾಗಿಯೇ ಬೀಸಿದ
ನಿನ್ನ ಕೈಹಿಡಿದು
ನಡೆವ ಬಯಸಿರುವೆ
ಬಂದು ಬಿಡು ಒಂದು ಸಾರಿ
ಹೆಜ್ಜೆ ಇಡು ನನ್ನ
ಭಾವನೆಗಳ ಲೋಕಕ್ಕೆ ಗೆಳತಿ ||
#ಸತೀಶಬಾರಿ
ತಪ್ಪು ಮಾಡಬೇಡಯ್ಯಾ
ನೀ ತಿಳಿದು ತಿಳಿದು
ತಪ್ಪು ಮಾಡಬೇಡಯ್ಯಾ
ನಿನ್ನ ತಪ್ಪಿನಿಂದ ಇನ್ನೊಬ್ಬರಿಗೆ
ತೊಂದರೆಯಾಗಬಾರದಯ್ಯಾ
ತಪ್ಪು ಮಾಡದವರು ಯಾರಿಲ್ಲವಯ್ಯಾ
ತಪ್ಪಿಗೆ ಶಿಕ್ಷೆ ನಿನ್ನ ತಪ್ಪೊಪ್ಪಿಗೆವಯ್ಯಾ
ನಿನ್ನ ತಪ್ಪನ್ನು ಇನೊಬ್ಬರು
ಕ್ಷಮಿಸಿದರೆ ಅದು ಅವಕಾಶವಯ್ಯಾ
ನಿನ್ನ ತಪ್ಪನ್ನು ನೀನೇ
ತಿದ್ದಿ ನಡೆದರೆ ಅದೇ
ಸದವಕಾಶವಯ್ಯಾ
#ಸತೀಶಬಾರಿ
ಹುಟ್ಟುವ ಮುನ್ನವೇ
ಭ್ರೂಣ ಹತ್ಯಯಾದ
ಕಂದಮ್ಮಗಳೆಷ್ಟೊ
ಬೆಳೆದ ಬೆಳೆ ಕೈಗೆ
ಬರುವ ಮುನ್ನವೇ
ಸಾಲಕ್ಕೆ ಸತ್ತ ರೈತರೆಷ್ಟೊ
ಸಂಸಾರ ಜವಾಬ್ದಾರಿ
ಹೊರುವ ಮುನ್ನವೇ
ವರದಕ್ಷಿಣೆ ಕಿರುಕುಳಕ್ಕೆ
ಹತ್ಯಯಾದ ಸಹೋದರಿಯರೆಷ್ಟೊ
ಉದ್ಯೋಗ ಸಿಗುವ
ಮುನ್ನವೇ ನಿರುದ್ಯೋಗಿಗಳಾಗಿ
ಸತ್ತ ವಿದ್ಯಾವಂತರೆಷ್ಟೊ
ಸಾಕು ಮಾಡೋಣ
ಸಮಸ್ಯೆಗಳ ಲೆಕ್ಕ
ಹಾಕುವುದನ್ನು
ನಿಲ್ಲಿಸಬೇಕಿದೆ ಅನ್ಯಾಯದ
ಆರ್ಭಟ
ಹೋರಾಡಬೇಕಿದೆ ಸಮಸ್ಯೆಗಳ
ವಿರುದ್ಧ
#ಸತೀಶಬಾರಿ
ಧರ್ಮಾಂಧರ ಬಾವಿಯಲ್ಲಿ
________________________
ಧರ್ಮಾಂಧರ ಬಾವಿ ಇದು
ಮನುಜ ನೀನಿಲ್ಲಿರಲು
ಮನುಷ್ಯನಾಗಿ ಯೋಗ್ಯನಲ್ಲ
ಇದು ಬಾವಿಯಲ್ಲವೊ
ಮೇಲು/ಕೀಳಿನ ಕೊಚ್ಚೆ
ನಿನಗಿಲ್ಲಿ ಈಜಲು ಬರುವುದಿಲ್ಲ
ಧರ್ಮಾಂಧ ಬಾವಿ ಇದು
ದುಷ್ಟರ ಕೊಂಪೆ ಇದು
ಮನುಷ್ಯತ್ವಕ್ಕೆ ಬೆಲೆಯಿಲ್ಲವೊ
ಅದರಲ್ಲಿರುವುದು ನೀರಲ್ಲವೊ ಮೂಢ
ಮತಾಂಧವೆಂಬ ವಿಷ
ಅದಕ್ಕೆ ಅಂಟಿಕೊಳ್ಳಬೇಡವೊ
ಅದನ್ನು ಕುಡಿಯಲು ಬೇಡವೋ
ರಾಕ್ಷಸರ ಬಾವಿ ಇದು
ನೀ ಇಣುಕಲು ಬೇಡವೋ
ದೂರ ಹೋಗಿ ಬಿಡು
ಮನುಷ್ಯನಾಗಿ ಬದುಕು
ಪ್ರೀತಿಸು ಎಲ್ಲರನ್ನೂ ಗೆಲ್ಲು
ಧರ್ಮಾಂಧರ ಬಾವಿ ಇದು
#ಸತೀಶಬಾರಿ
ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು .
ಚುನಾವಣೆ ಬಂದಾಗ ಮರೆಯದೆ
ಬರುವರು ಆಮೇಲೆ
ಅಣ್ಣ ನಿನ್ನನೇ ಮರೆಯುವರು
ನೋಟು ತೋರಿಸುವರೊ
ಅಣ್ಣ ಆಮೇಲೆ
ನಿನ್ನನೇ ಲೂಟಿಮಾಡುವರೊ||
ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು
ದೊಡ್ಡ ದೊಡ್ಡ ಭಾಷಣ ಮಾಡುವರೊ
ಅಣ್ಣ ಆಮೇಲೆ
ನಿನ್ನ ಮಾತು ಕೆಳದವರೊ
ಚುನಾವಣೆಯಲ್ಲಿ ಬರೀ
ಆಶ್ವಾಸನೆ ಕೊಡುವರೊ
ಅಣ್ಣ ಆಮೇಲೆ ನಿನ್ನ
ವಾಸನೆಯು ನೋಡದವರೊ||
ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು
ಎಲ್ಲರಿಗೂ ನಾಯಕರಾಗಬೇಕಾದವರೊ
ಅಣ್ಣ ಇವರು ಜಾತಿಗೆ ನಾಯಕರಾದವರೊ
ಸಮಾಜಕ್ಕೆ ದುಡಿಯಬೇಕಾದವರೊ
ಅಣ್ಣ ಇವರು ತಮ್ಮ ಮನೆಗೆ
ತುಂಬುತ್ತಿರುವರೊ||
ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು
ಜಗಳಕ್ಕೆ ಬೇರೆಯವರ ಮಕ್ಕಳನ್ನು
ಎಳೆದು ತರುವರೊ ಇವರು
ಅಣ್ಣ
ತಮ್ಮ ಮಕ್ಕಳನ್ನು
ಮನೆಯಲ್ಲಿಯೇ ಜೋಪಾನ ಮಾಡುವರೊ
ಜಾತಿಯ ಹೆಸರಲ್ಲಿ ರಾಜಕೀಯ
ಮಾಡುವರೊ ಅಣ್ಣ
ಸಮಾಜವನ್ನು ಅಂಧಕಾರದಲ್ಲಿ
ತಳ್ಳುವರೊ||
ಜಾತಿ ರಾಜಕಾರಣಿಗಳು ಇವರು ಜಾತಿ ರಾಜಕಾರಣಿಗಳು.
#ಸತೀಶಬಾರಿ
(ವಿ.ಸೂ. ಈ ಲೇಖನವು ವ್ಯಕ್ತಿಗತ ಯಾರ ವಿರುದ್ಧವೂ ಅಲ್ಲ ಮತ್ತು ಯಾರನ್ನು ನೋವು ಮಾಡಲಿಕ್ಕೆ ಅಲ್ಲ )
ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ
ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||
ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
ಉಪಯೋಗಿಸುತ್ತಿರುವಿರಿ
ಗೋವಿನ ಹೆಸರಲ್ಲೇ ರಾಜಕೀಯ
ಮಾಡುವಿರಿ
ಎಲ್ಲವೂದಕ್ಕು ಉಪಯೋಗವಾಗುವುದು
ಗೋವು
ಯಾವುದಕ್ಕೂ ಉಪಯೋಗವಾಗದವನ್ನು
ಮನುಜ||
ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||
ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..
#ಸತೀಶಬಾರಿ
ಅಂಬೆಯ ಕೂಗು ಇದು
ಕತೆಯಲ್ಲ ಗೋವಿನ ವ್ಯಥೆ
ಒಬ್ಬರು ಆಹಾರ ಅಂತ ಕೊಲ್ಲುವರು
ಇನ್ನೊಬ್ಬರು ದೇವರು ಅಂತ ಹೇಳಿ
ದೇವರ ಮುಂದೇನೆ ಕೊಲ್ಲುವರು
ಇಬ್ಬರ ನಡುವೆ ರಾಜಕೀಯ
ಮಾಡುತ್ತಿರುವನು ಒಬ್ಬನು||
ನಿಮ್ಮ ನಿಮ್ಮ ಸ್ವಾರ್ಥಕ್ಕೆ ಗೋವನ್ನು
ಉಪಯೋಗಿಸುತ್ತಿರುವಿರಿ
ಗೋವಿನ ಹೆಸರಲ್ಲೇ ರಾಜಕೀಯ
ಮಾಡುವಿರಿ
ಎಲ್ಲವೂದಕ್ಕು ಉಪಯೋಗವಾಗುವುದು
ಗೋವು
ಯಾವುದಕ್ಕೂ ಉಪಯೋಗವಾಗದವನ್ನು
ಮನುಜ||
ತನ್ನ ಜೀವನವೀಡಿ ಜಗತ್ತಿಗೇ
ಅನ್ನ ಕೊಡುವವನು ರೈತನಾದರೆ
ತನ್ನ ಜೀವನವಿಡೀ ಜಗತ್ತಿಗೆ
ಹಾಲು ಕೊಡುವುದು ಗೋವು
ರಕ್ಷಿಸಬೇಕಿದೆ ಸ್ಥಳೀಯ
ಗೋವಿನ ಸಂತತಿಯನ್ನು||
ನೆನಪಿರಲಿ ಮನುಜ ನಿನ್ನ ಎಲ್ಲಾ ದುಷ್ಟ ನಡತೆಗಳಿಗೆ
ಮುಂದೆ ಒಂದು ದಿನ ಕುಡಿಯಲು ಒಂದು ಹನಿ ನೀರು ಸಿಗಲಾರದ ಸಮಯ ಬರಬಹುದು ..
#ಸತೀಶಬಾರಿ
ಅವಿವೇಕಿಯಾಗಿದ್ದವನನ್ನು
ವಿವೇಕನ್ನಾಗಿ ಮಾಡಿದರು
ಅಜ್ಞಾನಿಯಾಗಿದ್ದವನನ್ನು
ಜ್ಞಾನಿಯನ್ನಾಗಿ ಮಾಡಿದರು
ಎತ್ತಲೋ ಸಾಗಿದ ಜೀವನವನ್ನು
ಸನ್ಮಾರ್ಗದ ಹಾದಿಯಲ್ಲಿ ಸಾಗಿಸಿದರು
ಕಲ್ಮಶಗಳನ್ನು ತುಂಬಿಕೊಂಡಿದ್ದ ಮನವನ್ನು
ನಿಷ್ಕಲ್ಮಶ ಮನವನ್ನಾಗಿಸಿದ್ದರು
ನನ್ನ ಗುರುಗಳಾದವರು
ನನ್ನ ಬದುಕಿನ ದಾರಿದೀಪವಾದವರು
ಅವರೇ ನನ್ನ
"ಸ್ವಾಮಿ ವಿವೇಕಾನಂದರು"
#ಸತೀಶಬಾರಿ
ನಾಳೆಯ ಬದುಕಿನ ಮುನ್ನುಡಿ ನೀನು
ಮುಂದಿನ ನನ್ನ ಕನಸುಗಳಿಗೆ
ಹೆಗಲು ಕೊಡುವಳು ನೀನು
ಜಿನುಗುತ್ತಿದೆ ನನ್ನ ಈ ಮನ
ಹೃದಯ ಸಮುದ್ರದಲ್ಲಿ
ನಿನ್ನದೆ ಅಲೆಗಳು
ನೀನ ಪ್ರೀತಿಯ ಅಲೆಗಳಿಗೆ
ಕೊಚ್ಚಿ ಹೋಗಿದೆ ನನ್ನ ಈ ಮನ
ಒಂದು ಸಾರಿ ಬಂದು ಬಿಡು ಬಳಿಗೆ
ಅದೇ ನನ್ನ ನಾ ಮರೆವ ಘಳಿಗೆ
ನೀನೇ ನನ್ನ ಪ್ರೇಯಸಿ.
#ಸತೀಶಬಾರಿ
ಕೆಳಲಾಗದೆ ಧರ್ಮಾಂಧರ
ಬಂದೂಕಿನ ಸದ್ದು
ನೋಡಲಾಗದೆ ಅಮಾಯಕರ
ಹೆಣದ ರಾಶಿಗಳು
ನಾನು ನನ್ನದು ಎಂದವರು
ಯಾರು ಉಳಿದಿಲ್ಲ
ದೇವರು ಬಂದು ಕಾಪಾಡಲಿಲ್ಲ ||
ಧರ್ಮಾಂಧತೆಯ ಅಫೀಮನ್ನು
ಸೇದುವ ಮತಾಂಧರು
ಅದರ ಹೊಗೆಗೆ ಸಾಯುತ್ತಿರುವವರು
ಅಮಾಯಕರು||
ದೇವಮಾನವರೆಂದು ಅಮಾಯಕರನ್ನು
ಮೋಸ ಮಾಡುತ್ತಿರುವಿರಿ
ಸ್ವರ್ಗದ ಸುಖಕ್ಕಾಗಿ ಇನ್ನೊಬ್ಬರ
ಕೊಲ್ಲುವಿರಿ
ಮೇಲು-ಕೀಳು ಎಂಬ ಕೊಚ್ಚೆಯಲ್ಲಿ
ಬಾಳುತ್ತಿರುವಿರಿ||
ಧರ್ಮಾಂದರೆ ಒಮ್ಮೆ ಹಿಂದಿರುಗಿ
ನೋಡಿ
ನೀವು ಯಾರನ್ನೂ ಸಾಯಿಸಿದ್ದಿರಿ ಎಂದು
ನಿಮ್ಮ ತಂದೆತಾಯಿ ಹಾಗೆ ಇರುವ
ಇನ್ನೂಬ್ಬರ ತಂದೆತಾಯಿರನ್ನು
ನಿಮ್ಮ ಸಹೋದರ-ಸಹೋದರಿಯರ
ಹಾಗೆ ಇರುವ
ಇನ್ನೊಬ್ಬರ ಸಹೋದರ. ಸಹೋದರಿಯರನ್ನ ||
ಸಾಕು ಮಾಡಿ ಧರ್ಮಾಂಧತೆಯ
ಕುಚ್ಛೆಸ್ಟೆಗಳನ್ನು
ನಿಮ್ಮ ಧರ್ಮಾಂಧತೆಯ ಫಲವನ್ನು
ನೋಡಲು ನಿಮ್ಮ ನಿಮ್ಮ
ದೇವರಿಗು ಭಯವಾಗುತ್ತಿರಬಹುದು
ಮನುಷ್ಯರನ್ನು ಮನುಷ್ಯರ ಹಾಗೆ
ಪ್ರೀತಿಸಿ |||…
#ಸತೀಶಬಾರಿ
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ
ಜಾತ್ರೆ ಎಂಬ ಜೀವನದಲ್ಲಿ
ನಿನ್ನ ತೇರು ಎಳೆಯುವವನ್ನು ನೀನೆ
ನಿನ್ನ ನಗುವೇ ಜಾತ್ರೆಗೆ ಅಲಂಕಾರ
ನಿನ್ನ ಆತ್ಮವಿಶ್ವಾಸವೇ ಜಾತ್ರೆಯ ಮೆರುಗು||
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ
ಅಲ್ಲಿ ಒಳ್ಳೆಯವರುಂಟು ಕೆಟ್ಟವರುಂಟು
ನಿನಗಾಗಿ ಬದುಕುವ ಜನರುಂಟು
ನಿನಗಾಗಿ ನಿನ್ನವರಿಗಾಗಿ ಸಾಗಲಿ ಜಾತ್ರೆ||
ಅಡ್ಡಬಂದವರಿಗೆ ಒದೆಯಬೇಡ
ಹೆದರಿಸಲು ಬಂದವರಿಗೆ ಹೆದರಬೇಡ
ಕೆಟ್ಟವರಬಗ್ಗೆ ಚಿಂತೆ ಮಾಡಬೇಡ
ಬಡಿದಾಡುವವರು ಬಡಿದಾಡಿಕೊಳ್ಳಲಿ
ಹಿಯ್ಯಾಳಿಸುತ್ತಿರುವ ಜನ
ಹಿಯ್ಯಾಳಿಸುತ್ತಲೆ ಇರಲಿ
ಸಹೋದರ ನಿಲ್ಲದಿರಲಿ ನಿನ್ನ
ಕಾಯಕದ ಜಾತ್ರೆ |||…
#ಸತೀಶಬಾರಿ