Sunday, January 31, 2016

ಸಮಸ್ಯೆ

ಹುಟ್ಟುವ ಮುನ್ನವೇ
ಭ್ರೂಣ ಹತ್ಯಯಾದ
ಕಂದಮ್ಮಗಳೆಷ್ಟೊ

ಬೆಳೆದ ಬೆಳೆ ಕೈಗೆ
ಬರುವ ಮುನ್ನವೇ
ಸಾಲಕ್ಕೆ ಸತ್ತ ರೈತರೆಷ್ಟೊ

ಸಂಸಾರ ಜವಾಬ್ದಾರಿ
ಹೊರುವ ಮುನ್ನವೇ
ವರದಕ್ಷಿಣೆ ಕಿರುಕುಳಕ್ಕೆ
ಹತ್ಯಯಾದ ಸಹೋದರಿಯರೆಷ್ಟೊ

ಉದ್ಯೋಗ ಸಿಗುವ
ಮುನ್ನವೇ ನಿರುದ್ಯೋಗಿಗಳಾಗಿ
ಸತ್ತ ವಿದ್ಯಾವಂತರೆಷ್ಟೊ

ಸಾಕು ಮಾಡೋಣ
ಸಮಸ್ಯೆಗಳ ಲೆಕ್ಕ
ಹಾಕುವುದನ್ನು

ನಿಲ್ಲಿಸಬೇಕಿದೆ ಅನ್ಯಾಯದ
ಆರ್ಭಟ
ಹೋರಾಡಬೇಕಿದೆ ಸಮಸ್ಯೆಗಳ
ವಿರುದ್ಧ

#ಸತೀಶಬಾರಿ

No comments:

Post a Comment