Thursday, February 25, 2016

ನನ್ನ ಭಾರತ ನನ್ನ ಹೆಮ್ಮೆ

ಜಾತಿ ಧರ್ಮವನ್ನು ಮರೆಯೊಣಾ
ಭಾರತದ ಏಕತೆಗಾಗಿ ನಡೆಯೊಣಾ

ದೇಶದ್ರೋಹಿಗಳು ದೇಶವೈರಿಗಳು
ಯಾರೇ ಆಗಿರಲಿ ಸದೆ ಬಡೆಯೊಣಾ
ಭಾರತಕ್ಕಾಗಿ ದುಡಿಯೊಣಾ

ದೇಶ ಸೇವೆಯು ದೇವರ ಸೇವೆಯು
ದೇಶವೇ ನಮ್ಮ ಉಸಿರು, ನಮ್ಮ ಸರ್ವಸ್ವ

ಭಾರತವು ಸುಮ್ಮನೇ ದೇಶವಾಗಿಲ್ಲವೊ
ಸಾವಿರಾರು ವರ್ಷಗಳ ಇತಿಹಾಸ
ಉಂಟು ನೀ ತಿಳಿಯೋ

ಸ್ವತಂತ್ರ್ಯಕ್ಕಾಗಿ ದೇಶದ ಜನರ
ರಕ್ತದ ಕೊಡಿ ಹರಿದು
ಶೂರರ ಧೀರರ ದೇಶ ಭಾರತ

ನೂರಾರು ದೇಶಗಳಿರಬಹುದು
ನಮ್ಮ ಭಾರತ ನಮಗೆ ಶ್ರಷ್ಠ

ಬನ್ನಿ ಸಹೋದರ ಸಹೋದರಿಯರೆ
ಭಾರತಕ್ಕಾಗಿ ದುಡಿಯೊಣಾ
ಭಾರತಕ್ಕಾಗಿ ನಡೆಯೊಣಾ

ನನ್ನ ಭಾರತ ನನ್ನ ಹೆಮ್ಮೆ

#ಸತೀಶಬಾರಿ

Tuesday, February 23, 2016

ಗೆಳತಿ

ನನ್ನ ಭಾವನೆಯ ಲೋಕದ ಗೆಳತಿ
ಹೆಜ್ಜೆ ಇಡುವೆಯಾ ನನ್ನೊಡನೆ
ಬರುವೆಯಾ ಮೆಲ್ಲನೆ ||

ಮೆಲ್ಲನೆ ನಡೆದು ಬಿಡು ನನ್ನೊಡನೆ
ಮತ್ತೆ ನನ್ನ ಬಿಟ್ಟು
ಹೋಗಲಾರದಷ್ಟು ದೂರವ ||

ನೀನೆ ನನ್ನ ಲೋಕದ ಒಡತಿಯಾಗರುವಾಗ
ಇನ್ನೆಕೇ ದೂರವಾಗುವ ಮಾತು
ಪ್ರತಿ ಕ್ಷಣವು ನಿನ್ನ ಹಾಜರಾತಿ
ಬಯಸುತ್ತಿದೆ ನನ್ನ ಈ ಮನ||

ನೋಡು ಒಂದು ಸಾರಿ
ನನ್ನ ಮನಸ್ಸಿನ ಅವ್ಯವಸ್ಥೆಯ
ಬಿಳಿ ಹಾಳೆಯಾಗಿತ್ತು ನನ್ನ ಈ ಮನ
ಮೃದು ಮನಸ್ಸಿನ ಮೇಲೆ
ನಿನ್ನದೆ ಭಾವನೆಗಳ ಚಿತ್ತಾರ ||

#ಸತೀಶಬಾರಿ

Saturday, February 20, 2016

ಸಾಮರಸ್ಯ ಜೀವನ

ಸಾಮರಸ್ಯ ಜೀವನ
_____________________

ಪ್ರತಿಯೊಬ್ಬರನ್ನು ಪ್ರೀತಿಸಿ ಗೌರವವಿಸುವುದು, ಮನುಷ್ಯನು ಮತ್ತೊಬ್ಬ ಮನುಷ್ಯನ ಜೊತೆ ಒಳ್ಳೆಯ ಸಹ-ಜೀವನವನ್ನು ಹೊಂದಬೇಕು, ಸಹೃದಯತೆಯಿಂದ ಜೀವಿಸಬೇಕು ಎಂಬ ಕಲ್ಪನೆಯೇ "ಸಾಮರಸ್ಯ".

     ನಾವೆಲ್ಲರೂ ಒಂದೇ ನಮ್ಮಲ್ಲಿ ಸೈದ್ಧಾಂತಿಕ ಅಭಿಪ್ರಾಯಗಳು ಬೇರೆ ಬೇರೆ ಇರಬಹುದು ಆದರೆ, ನಾವೆಲ್ಲರೂ ಮನುಷ್ಯರು ಎಂಬ ಭಾವನೆ, ಪ್ರೀತಿ ನಮ್ಮಲ್ಲಿ ಬರಬೇಕು. ಮನುಷ್ಯ ತನ್ನ ಮನಸ್ಸಿಗೆ ಹಾಕಿಕೊಂಡಿರುವ ಜಾತಿ ಧರ್ಮ ಎಂಬ ಬೇಲಿಯಿಂದ ನರಳಾಡಿ ಬಡಿದಾಡಿ ತನಗೂ ಸುಖವಿಲ್ಲ ಇನ್ನೊಬ್ಬರಿಗು ಸುಖವಿಲ್ಲದೆ ಬಾಳುತ್ತಿರುವುದು ಅಸಹ್ಯ ಸಂಗತಿ.    ಮನುಷ್ಯನು ಸಂಕುಚಿತ ಮನಸ್ಸಿಂದ ಹೊರಬರಲೆಬೇಕು, ಇಲ್ಲವಾದರೆ ಮನುಷ್ಯನಿಗೆ ಉಳಿಗಾಲವಿಲ್ಲ .

ಸಾಮರಸ್ಯ ಜೀವನವೇ ಒಂದು ಅದ್ಭುತವಾದ ಅನುಭವ. ಅದರಲ್ಲೂ ಭಾರತೀಯರು ವಿಶ್ವಕ್ಕೆ ಸಾಮರಸ್ಯ ಜೀವನ ಎಂದರೆ ಏನು ಅಂತ ತೋರಿಸಿಕೊಟ್ಟವರು, ಭಾರತೀಯರ ಸಾಮರಸ್ಯ ಮತ್ತು ಜೊತೆಯಾಗಿ ಕೂಡಿಬಾಳುವಿಕೆಯ ಸಂಸ್ಕೃತಿಯೇ "ಭಾರತದ ಹೆಗ್ಗುರುತು"

"ವಸುದೈವ ಕುಟುಂಬಕಂ" ಎಂದು ವಿಶ್ವಕ್ಕೆ ಸಾರಿದ ದೇಶ ಭಾರತ, ಎಂತಹ ಅದ್ಭುತ ಭಾವ ಭಾರತೀಯರದ್ದು ಇಡೀ ವಿಶ್ವವೇ ಒಂದು ಕುಟುಂಬ ಅದರಲ್ಲಿ ನಾನು ಒಬ್ಬ ಎಂಬ ಭಾವನೆ ಪ್ರತಿಯೊಬ್ಬ ಭಾರತೀಯನದ್ದು .

ಶರಣ ಶ್ರೀ ಬಸವಣ್ಣನವರು

ಇವನಾರವ ಇವನಾರವ
ಇವನಾರವನೆಂದೆನಿಸದಿರಯ್ಯ
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆಂದೆನಿಸಯ್ಯಾ
ಕೂಡಲಸಂಗಮ ದೇವಯ್ಯಾ
ನಿಮ್ಮ ಮನೆಯ
ಮಗನೆಂದೆನಿಸಯ್ಯಾ

ಹೇಳಿದ ಹಾಗೆ,
ಮನುಷ್ಯನು ಮನುಷ್ಯನನ್ನು ಯಾವ ಜಾತಿ ಯಾವ ಧರ್ಮ ಅಂತ ನೋಡದೆ ಪ್ರತಿಯೊಬ್ಬರು ನಮ್ಮವರು
ಎಂಬ ಭಾವನೆ ನಮ್ಮಲ್ಲಿ ಬಂದಾಗ ಜೀವನವು ಶಾಂತಿಯಿಂದ ಸಾಗಲಿದೆ.

ಒಂದು ದೇಶವು ಸಂಪೂರ್ಣ ಸ್ವಾವಲಂಬನೆಯಾಗಬೇಕಾದರೆ ಆ ದೇಶದ ಜನರ ಸೌಹಾರ್ದತೆ ಮತ್ತು ಸಾಮರಸ್ಯ ಜೀವನವು ತುಂಬ ಪ್ರಮುಖ ಪಾತ್ರವಹಿಸುತ್ತದೆ. ಒಬ್ಬ ವ್ಯಕ್ತಿಯು, ಒಂದು ಸಮಾಜವು, ಒಂದು ದೇಶವು ಭೌತಿಕವಾಗಿ ಮತ್ತು ಬೌದ್ಧಿಕವಾಗಿ ಸಾಮರಸ್ಯ ಜೀವನ ನಡೆಸಿದರೆ ಉತ್ತಮ ಬೆಳವಣಿಗೆ ಕಾಣಬಹುದು, "ಭಾರತವು ಆ ದಿಶೆಯಲ್ಲಿ ಸಾಗಲಿ ಅಂತ ಹಾರೈಸುವ" .

ಜೈ ಭಾರತ , ವಂದೇ ಮಾತರಂ

#ಸತೀಶಬಾರಿ

Wednesday, February 17, 2016

ಗೆಳತಿ

ನಿನ್ನ ಹೃದಯದ
ಬಾಗಿಲಿಗೆ ಬಂದಿರುವೆ
ಒಳ ಬರಲು ಅಪ್ಪಣೆಯೇ
ಗೆಳತಿ ||

ಪ್ರೀತಿ ಕನಸು
ಹೊತ್ತು ಬಂದಿರುವೆ
ನಿನ್ನ  ಒಲವ
ಬಯಸಿ ನಿಂತಿರುವೆ
ಜೊತೆಯಿರಲು
ಅಪ್ಪಣೆಯೇ ಗೆಳತಿ||

ಇಳಿಸಂಜೆಯ ತಂಗಾಳಿಯು
ನಮ್ಮಿಬ್ಬರಿಗಾಗಿಯೇ ಬೀಸಿದ
ನಿನ್ನ ಕೈಹಿಡಿದು
ನಡೆವ ಬಯಸಿರುವೆ
ಬಂದು ಬಿಡು ಒಂದು ಸಾರಿ
ಹೆಜ್ಜೆ ಇಡು ನನ್ನ
ಭಾವನೆಗಳ ಲೋಕಕ್ಕೆ ಗೆಳತಿ ||

#ಸತೀಶಬಾರಿ

Monday, February 1, 2016

ತಪ್ಪು

ತಪ್ಪು ಮಾಡಬೇಡಯ್ಯಾ

ನೀ ತಿಳಿದು ತಿಳಿದು
ತಪ್ಪು ಮಾಡಬೇಡಯ್ಯಾ

ನಿನ್ನ ತಪ್ಪಿನಿಂದ ಇನ್ನೊಬ್ಬರಿಗೆ
ತೊಂದರೆಯಾಗಬಾರದಯ್ಯಾ

ತಪ್ಪು ಮಾಡದವರು ಯಾರಿಲ್ಲವಯ್ಯಾ
ತಪ್ಪಿಗೆ ಶಿಕ್ಷೆ ನಿನ್ನ ತಪ್ಪೊಪ್ಪಿಗೆವಯ್ಯಾ

ನಿನ್ನ ತಪ್ಪನ್ನು ಇನೊಬ್ಬರು
ಕ್ಷಮಿಸಿದರೆ ಅದು ಅವಕಾಶವಯ್ಯಾ

ನಿನ್ನ ತಪ್ಪನ್ನು ನೀನೇ
ತಿದ್ದಿ ನಡೆದರೆ ಅದೇ
ಸದವಕಾಶವಯ್ಯಾ


#ಸತೀಶಬಾರಿ